08/01/2026
ಇಂದು ನಮ್ಮ ಸಹಕಾರಿಯ ಸಾಮಾಜಿಕ ಕಾರ್ಯಕ್ರಮದಡಿ ಶಿರಸಿ ಗ್ರಾಮೀಣ ಪೋಲೀಸ್ ಠಾಣೆಗೆ ಸಹಕಾರಿಯಿಂದ ಒಂದು ಕಂಪ್ಯೂಟರ್ ಮತ್ತು ಪ್ರಿಂಟರ್ ಕೊಡುಗೆ ನೀಡಲಾಯಿತು. ಸಹಕಾರಿಯ ಅಧ್ಯಕ್ಷರಾದ ಶ್ರೀಮತಿ ಸರಸ್ವತಿ ಎನ್ ರವಿ ಠಾಣೆಯ ಪಿ ಎಸ್ ಐ ಸಂತೋಷ ಕುಮಾರ್ ಅವರಿಗೆ ಕಂಪ್ಯೂಟರ್ ಮತ್ತು ಪ್ರಿಂಟರ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಹಕಾರಿಯ ನಿರ್ದೇಶಕರಾದ ಮಾಲಿನಿ ಶ್ರೀಧರ್ ನಾಯ್ಕ, ವೀಣಾ ಮೊಗೇರ, ಭಾಗೀರತಿ ನಾಯ್ಕ ಮತ್ತು ಮುಖ್ಯ ಕಾರ್ಯನಿರ್ವಾಹಕರಾದ ಗಣಪತಿ ನಾಯ್ಕ,ವ್ಯವಸ್ಥಾಪಕರಾದ ವಂದನಾ, ರಿಕವರಿ ಆಪಿಸರ್ ನಾಗರಾಜ್ ನಾಯ್ಕ,ಸಿಬ್ಬಂದಿಗಳಾದ ಸೌಮ್ಯಾ ನಾಯ್ಕ, ಕಾರ್ತಿಕ್ ಪಟಗಾರ, ಗ್ರಾಮೀಣ ಠಾಣೆಯ ಪ್ರದೀಪ್ ರೇವಣಕರ್, ದಾವುಲ್ ಸಾಬ್ ಮತ್ತಿತರರು ಉಪಸ್ಥಿತರಿದ್ದರು.